ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ದೀಪಾವಳಿ ಪ್ರಯುಕ್ತ ಹೊಸ ಕವನ- ಒಲವಿನ ಬೆಳಕು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಒಲವ ಹಣತೆಗೆ ಜ್ಯೋತಿ ಹಚ್ಚಿರಿ

ನಲವ ಹಂಚುತ ಬಾಳಿರಿ.

ಬಲವು ಇರುವುದು ಒಲವಿನಲ್ಲಿಯೆ

ಛಲವನೆಲ್ಲರು ದೂಡಿರಿ.


ಎಣ್ಣೆ ಮಜ್ಜನ ಲಕ್ಷ್ಮಿ ಪೂಜೆಯು

ಬಣ್ಣ ಬಣ್ಣದ ಸಿಹಿಗಳು

ಬಾಲರೆಲ್ಲರು ಸುಡುವ ಮದ್ದನು

ದೂರದಿಂದಲೆ ಗಮನಿಸಿ


ವಿಷ್ಣು ಚಕ್ರವು ಸುಡುವ ಬತ್ತಿಯು

ಹೂವ ಕುಂಡದ ಸೋಜಿಗ

ಬೆಳಕಿನುಯ್ಯಲೆಯಲ್ಲಿ ಜೀಕಿದೆ

ಮನೆಯ ದೀಪದ ಓಲಗ.


ಬಲಿಯು ಬಂದನು ಸಿರಿಯ ತಂದನು

ಕೋಟೆ ಅವನಿಗೆ ಕಟ್ಟಿರಿ.

ಮನದ ಒಳಗಿನ ದುಗುಡವೆಲ್ಲವ

ಆತ್ಮ ಬಲದಲಿ ಮೆಟ್ಟಿರಿ.


ಜಗದಿ ಎಲ್ಲೆಡೆ ಜನರ ಸಂತಸ

ಹಾಲ ಹಳ್ಳವೇ ಆಗಲಿ

ದುಡಿದು ಉಣ್ಣುವ ಬೆವರ ಜೊತೆಯಲಿ

ಎನುವ ಆಶಯ ಬೆಳಗಲಿ.


ವರ್ಷ ಸುರಿಯಲಿ ಹರ್ಷ ಬೆಳೆಯಲಿ

ಘರ್ಷಣೆಯು ದೂರಾಗಲಿ.

ಬಂಧು ಬಳಗವು ಸಿಹಿಯ ಸವಿಯುತ

ಮತ್ಸರವ ತಾವ್ ದೂಡಲಿ.


ಬೆಳಕ ಹಬ್ಬವು ತರಲಿ ಭೂಮಿಗೆ

ಶಾಂತಿ ಸಹನೆಯ ಸಡಗರ

ನಾಡಿನೆಲ್ಲೆಡೆ ಹಬ್ಬಿ ಹರಡಲಿ

ದೀಪದೊಲವಿನ ಅಂಕುರ.

- ತನಾಶಿ.


ರಚನೆ:   ತ.ನಾ.ಶಿವಕುಮಾರ.ಮಂಡ್ಯ

ರಾಗ.ಸಂಗೀತ. ಗಾಯನ ಕಲಾಶ್ರೀ ವಿದ್ಯಾಶಂಕರ್. ಮಂಡ್ಯ.


Post a Comment

ನವೀನ ಹಳೆಯದು