ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಕಗಳು- ಕಲಿಯುಗದ ಮಹಿಮೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಆಲಿಸಿ: ಮುಕ್ತಕಗಳು- ಕಲಿಯುಗದ ಮಹಿಮೆ

ರಚನೆ: ವಿಬಿ ಕುಳಮರ್ವ

ಸಂಗೀತ-ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ



ಕಲಿಯುಗದ ಮಹಿಮೆಯನು ನಿಮಗೊರೆಯುವೆನು ನಾನು 
ನಲಿವಿರದ ಕಾಲವಿದು ಸುಜನ ಸಂತತಿಗೆ | 
ಹಲವು ದುಷ್ಟರು ಬದುಕಿ ಸಜ್ಜನರು ಸಾಯುವರು   
ಸುಲಿಯುವರು ಹಲವಿಧದಿ - ಪುಟ್ಟಕಂದ ||   

ಕುತ್ತಿಗೆಯ ಹಿಸುಕುತ್ತ ಅಧಿಕಾರ ಪಡೆದಾಗ 
ಉತ್ತಮರು ಸೋಲುವರು ಅಧಮರೀಸುವರು | 
ಮತ್ತೆ ಚಿಂತಿಸಿ ಫಲವಿರದು ನರರ ಜೀವಿತದಿ 
ಸತ್ತರೂ ಬೆಲೆಯಿರದು - ಪುಟ್ಟಕಂದ || 

-ವಿ.ಬಿ.ಕುಳಮರ್ವ , ಕುಂಬ್ಳೆ 

ಇದನ್ನು ರಾಗ ಸಂಯೋಜನೆ ಮಾಡಿ ಹಾಡಿದವರು ಖ್ಯಾತ ಗಮಕಿ ಕಲಾಶ್ರೀ ವಿದ್ಯಾಶಂಕರ ಮಂಡ್ಯ

Post a Comment

ನವೀನ ಹಳೆಯದು