ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ದಕ್ಷತೆ (ಮುಕ್ತಕಗಳು) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ದಕ್ಷತೆಯು ಇರಬೇಕು ಕಾಯಕದ ಹಾದಿಯಲಿ 

ಇಕ್ಷುಚಾಪನ ಗೆಲಿವ ನಿರ್ಧಾರ ಬೇಕು | 

ಚಕ್ಷುಗಳ ಕಾಂತಿಯಲಿ ಸಾಧಿಸುವ ಛಲಬೇಕು  

ಕುಕ್ಷಿತುಂಬಲು ಸುಖದಿ - ಪುಟ್ಟಕಂದ ||  


ಗುರುವಿನಲಿ ಇರಬೇಕು ದಕ್ಷತೆಯ ಪಡಿನೆಳಲು 

ಸರಳ ಜೀವನದ ಹರಕಾರನೆನಿಸಲಿಕೆ |  

ವಿರಳವಾಗಿಹರಿಂದು ಗುರುವರ್ಯ ಯೋಗಿಗಳು 

ನೆರಳಾಗು ಗುರುವರನ - ಪುಟ್ಟಕಂದ ||


 


ಎಲ್ಲಿಗೂ ಸಲ್ಲದವ ಗುರುಕರುಣೆ ದೊರಕಿದರೆ 

ಬಲ್ಲಿದನು ತಾನೆನಿಸಿ ಜನರ ತಿದ್ದುವನು | 

ಫುಲ್ಲಲೋಚನ ಹರಸೆ ಸಲ್ಲದಿಹುದೆಲ್ಲಿಹುದು 

ಖುಲ್ಲಮನವಿಲ್ಲದಿರೆ - ಪುಟ್ಟಕಂದ || 

( ಛಂದೋಬದ್ಧ ಮುಕ್ತಕ ತ್ರಯ) 

ರಚನೆ:- ವಿ.ಬಿ.ಕುಳಮರ್ವ , ಕುಂಬ್ಳೆ 

ಗಾಯನ:- ಕಲಾಶ್ರೀ ವಿದ್ಯಾಶಂಕರ್ ಮಂಡ್ಯ 


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

ನವೀನ ಹಳೆಯದು