ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಕಗಳು- ಮಾತು ಬೆಳ್ಳಿ-ಮೌನ ಬಂಗಾರ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


~~~~~~~~ 

ಮಾತೆಂಬುದಕೆ ಬೆಳ್ಳಿ ಪರ್ಯಾಯವೆನ್ನುವರು 

ವೀತರಾಗದ ಮೌನ ಬಂಗಾರವಂತೆ | 

ಜೋತುಬೀಳಲು ಬೇಡ ಬಿಳಿ ಹಳದಿ ಲೋಹಕ್ಕೆ  

ಸೋತು ಬೆಲೆ ಕಳೆಯದಿರು - ಪುಟ್ಟಕಂದ ||   


ಮಾತಿನಲಿ ಇಹಪರವು ಮೌನದಲಿ ಪಾಂಡಿತ್ಯ   

ಭೂತವೈದರಲಿಹುದು ಜೀವಭಾವಗಳು | 

ನೀತಿಯಲಿ ಸತ್ಪಥವು ಸೋಲದಂತಿರಬೇಕು 

ನೇತಿಗಳೆ ಮೌಢ್ಯವನು - ಪುಟ್ಟಕಂದ ||   


ನೂರಾರು ಮಾತುಗಳ ಮೀರುವುದು ಮೋನಸಿರಿ  

ಸಾರವಿಹ ಭಾವಗಳ ಬಿಂಬಿಸುತ ಮೊಗದಿ |  

ನೇರವರ್ತನೆಯಲ್ಲಿ ಪಾರವನು ಕಾಣುವುದು  

ಭೂರಮೆಯ ವೈಶಿಷ್ಟ್ಯ - ಪುಟ್ಟಕಂದ || 

(ಗಜಪ್ರಾಸವಿರುವ ಛಂದೋಬದ್ಧ ಆಶು ಮುಕ್ತಕ ತ್ರಯ) 

ವಿ.ಬಿ.ಕುಳಮರ್ವ , ಕುಂಬ್ಳೆ ✍️


 


ರಾಗ ಸಂಯೋಜನೆ ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು