ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ರಕ್ಷಾ ಬಂಧನ- ಮಕ್ಕಳ ಕವನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


                

ರಕ್ಷೆಯ ಕಟ್ಟಲು 

ಬಂದಳು ತಂಗಿಯು 

ಅಣ್ಣನ ಕೈಗಳಿಗೆ || 


            ಬಲಗೈ ಹಿಡಿಯುತ 

            ಮುಂದಕೆ ಸೆಳೆಯುತ 

            ರಾಖಿಯ ತೋರಿದಳು||


ಕರವನು ಪಿಡಿಯುತ 

ಕಟ್ಟಿಯೆ ಬಿಟ್ಟಳು 

ಮಮತೆಯ ಸೂತ್ರವನು || 


            ತಲೆಯನು ಎತ್ತುತ 

             ಹಣೆಯನು ಮುಟ್ಟುತ 

             ತಿಲಕವನಿರಿಸಿದಳು  || 


ಅಣ್ಣನ ಪ್ರೀತಿಯ 

ಉಡುಗೊರೆ ಪಡೆಯುತ 

ತಂಗಿಯು ನಮಿಸಿದಳು ||


           

           ಕಣ್ಮನ ಸೆಳೆಯುವ 

           ಸುಂದರ ರಾಖಿಯು 

           ಪ್ರೀತಿಯ ದ್ಯೋತಕವು||


ಇರಲೀ ಪ್ರೀತಿಯು 

ಅನಂತ ಕಾಲಕು 

ಕರುಳಿನ ಸಂಬಂಧ || 


          ಹಗೆತನ ಮರೆಯುತ 

           ಜಗವನೆ ಗೆಲ್ಲಲು 

  ‌‌         ರಾಖಿಯೆ ಸೋಪಾನ || 


ಎಲ್ಲಾ ಸೋದರಿಯರಿಗೂ ರಕ್ಷಾ ಬಂಧನದ ಶುಭಾಶಯಗಳು.

           ಓಂ ಸ್ವಸ್ತಿ  🕉✡ 

ರಚನೆ:- 

ವಿ.ಬಿ.ಕುಳಮರ್ವ, ಕುಂಬ್ಳೆ

ಹಾಡಿರುವವರು: ಅವನಿಶ್ರೀ ಕುಳಮರ್ವ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

ನವೀನ ಹಳೆಯದು