ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ರಂಗನಾಥನೆ ನಿಮ್ಮ ಕಾಣದೆ ಭಂಗಪಟ್ಟೆನೊ ಅನುದಿನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಆಲಿಸಿ: ಭಕ್ತಿಗೀತೆ- ರಂಗನಾಥನೆ ನಿಮ್ಮ ಕಾಣದೆ ಭಂಗಪಟ್ಟೆನೊ ಅನುದಿನ

ಗಾಯನ: ಶ್ರೀ ವಿದ್ಯಾಭೂಷಣರು




ರಂಗನಾಥನೆ ನಿಮ್ಮ ಕಾಣದೆ 

ಭಂಗ ಪಟ್ಟೆನು ಬಹುದಿನಾ...||ರಂಗ||

ಮಂಗಳಾಂಗ ನಿಮ್ಮ ಪಾದವ

ಎನ್ನ ಕಂಗಳಿಗೇ ತೋರೋ...||ಮಂಗಳಾಂಗ||

                                 ||ರಂಗನಾಥನೆ||

ಭಂಗ ಪಟ್ಟೆನು ಬಹುದಿನಾ ...


ಕರಿಯ ಮೊರೆ ಲಾಲಿಸಿದಿ ಬೇಗನೆ 

ನೆರೆದ ಸಭೆಯಲಿ ದ್ರೌಪದಿಗೆ 

ಅಭಯವನಿತ್ತೇ           ||ಕರಿಯ||

ಅಡವಿಯಲಿ ಅಹಲ್ಯೆಯ ಸಲಹಿದಿ 

ಮುಚುಕುಂದನ ರಕ್ಷಿಸಿದೀ||ಅಡವಿ||

ಮುಚುಕುಂದನ ರಕ್ಷಿಸಿದೀ....

                                 ||ರಂಗನಾಥನೆ||

ಭಂಗ ಪಟ್ಟೆನು ಬಹುದಿನ. ....


ಪುಟ್ಟ ಪ್ರಹ್ಲಾದನ ಸಲಹಿದಿ 

ಪಟ್ಟವನು ವಿಭೀಷಣನಿಗೆ ಸಲ್ಲಿಸಿದಿ

                               ||ಪುಟ್ಟ||

ದಟ್ಟ ಅಡವಿಲಿ ಬಂದ ಧ್ರುವನ 

ಆದರಿಸಿ ಕಾಯ್ದ ರಂಗನಾಥ||ದಟ್ಟ||

ಆದರಿಸಿ ಕಾಯ್ದ ರಂಗನಾಥ.... 

                                ||ರಂಗನಾಥನೆ||

ಭಂಗ ಪಟ್ಟೆನು ಬಹುದಿನ. ...


ಎಷ್ಟು ಹೇಳಲಿ ನಿಮ್ಮ ಮಹಿಮೆಯ

ಸ್ರಿಷ್ಠಿ ಸ್ಥಿತಿ ಲಯವನ್ನು ಅಳೆದೆ, ರಂಗನಾಥಾ

                                ||ಎಷ್ಟು||

ಈ ಪುಟ್ಟ ಪಾದವ ಎನ್ನ ಮನದಲಿ

ಇಟ್ಟು ದಯಮಾಡೊ ಕ್ರಷ್ಣಾ. ...||ಈ ಪುಟ್ಟ||

ಇಟ್ಟು ದಯಮಾಡೊ ಕ್ರಷ್ಣಾ. ....

                                ||ರಂಗನಾಥನೆ||

ಭಂಗ ಪಟ್ಟೆನು ಬಹುದಿನ. ...


ದಕ್ಷಿಣ ಮುಖವಾಗಿ ಪವಡಿಸಿದಿ  ನೀ

ದೇವಶಿಖಾಮಣೀ ಏಳೈ...

ದೇವಶಿಖಾಮಣೀ ಏಳೈ....||ದಕ್ಷಿಣ||

ಬಂದ ಭಕ್ತರಿಗೆಲ್ಲಾ 

ಅಭಯ ಹಸ್ತವ ಕೊಡುವಿ  

ರಾಜೀವನೇತ್ರ ಹಯವದನ||ಅಭಯ||

ರಾಜೀವನೇತ್ರ ಹಯವದನಾ.... 

                                  ||ರಂಗನಾಥನೆ||



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು