ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಗುಂಡಿಗೆ ಬಿದ್ದ ಕರುವಿನ ರಕ್ಷಣೆ: ನಿಖಿಲ್ ಪೂಜಾರಿ ಅವರ ಶ್ರಮಕ್ಕೆ ವ್ಯಾಪಕ ಶ್ಲಾಘನೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮಂಗಳೂರು: ಪಣಂಬೂರಿನಿಂದ ತಣ್ಣೀರುಬಾವಿಗೆ ಹೋಗುವ ಕುದುರೆಮುಖ ರಸ್ತೆಯ ಬದಿಯಲ್ಲಿ ಗುತ್ತಿಗೆ ಕಾರ್ಮಿಕರು ಬೇಜವಾಬ್ದಾರಿಯಿಂದ ತೋಡಿಟ್ಟ ಹತ್ತು ಅಡಿ ಆಳದ ಗುಂಡಿಗೆ ಇಂದು ಬೆಳಗ್ಗೆ ಬಿದ್ದ ಪುಟ್ಟ ಕರುವೊಂದನ್ನು ನಿಖಿಲ್ ಪೂಜಾರಿ ಅವರು ತಮ್ಮ ಸ್ನೇಹಿತರ ಜತೆಗೂಡಿ ಮೇಲಕ್ಕೆತ್ತಿ ರಕ್ಷಿಸಿದರು. ಕರು ಗುಂಡಿಗೆ ಬಿದ್ದು ಒದ್ದಾಟ ನಡೆಸುತ್ತಿದ್ದಾಗ ಆ ಮಾರ್ಗವಾಗಿ ಸಾಗುತ್ತಿದ್ದ ನಿಖಿಲ್ ಪೂಜಾರಿ ಅವರಿಗೆ ಇದು ಕಾಣಿಸಿತು. ಕೂಡಲೇ ಅವರು ಮೂರ್ನಾಲ್ಕು ಮಂದಿ ಸ್ನೇಹಿತರ ನೆರವಿನೊಂದಿಗೆ ಗುಂಡಿಗೆ ಇಳಿದು ಕರುವನ್ನು ಮೇಲಕ್ಕೆತ್ತಿದರು.  ಬಳಿಕ ಆದರ ಆರೈಕೆ ಮಾಡಿ ಕರುವನ್ನು ಅದರ  ವಾರಸುದಾರರಿಗೆ ಒಪ್ಪಿಸಲಾಗಿದೆ.

ನಿಖಿಲ್ ಪೂಜಾರಿಯವರ ಈ ಕಾರ್ಯಕ್ಕೆ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗಿವೆ.





Post a Comment

ನವೀನ ಹಳೆಯದು