ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನೋಡಬನ್ನಿ ಅಂದದ ಗೋಮಯ ದೀಪ, ಕಲಾಕೃತಿಗಳು: ಮಳವಳ್ಳಿಯ ಈ ಸೋದರರಿಂದ 'ಆತ್ಮನಿರ್ಭರ' ಪ್ರಯೋಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಗೋಮಯ ಗಣಪತಿ ಅಭಿಯಾನದ ಬಳಿಕ ಇದೀಗ ದೀಪಾವಳಿಯನ್ನು ಗೋಮಯ ಹಣತೆಗಳೊಂದಿಗೆ ಆಚರಿಸಲು ಸಿದ್ಧತೆ ನಡೆದಿದೆ. ಆದರೆ ಮಂಡ್ಯದ ಮಳವಳ್ಳಿ ಸಮೀಪದ ಈ ಮೂವರು ಸಹೋದರರು ಮೂರು ವರ್ಷಗಳ ಹಿಂದೆಯೇ ತಮ್ಮ ಊರಿನಲ್ಲಿ ಸಣ್ಣ ಪ್ರಮಾಣದಲ್ಲಿ ದೇಸಿ ಹಸುಗಳ ಸಾಕಣೆ, ಗೋಮಯದಿಂದ ಹಣತೆಗಳು, ಅಗ್ನಿಹೋತ್ರದ ಧೂಪ, ಅಗರಬತ್ತಿ, ದೇವತೆಗಳ ಮೂರ್ತಿಗಳು, ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ.



ದೇಸಿ ಗೋವುಗಳ ಸಾಕಣೆಯಿಂದ ಬರುವ ಹಾಲು ಒಂದು ಉಪ ಉತ್ಪನ್ನವೇ ಹೊರತು ಪ್ರಮುಖ ಉತ್ಪನ್ನವಲ್ಲ. ಗೋಮಯ, ಗೋಮೂತ್ರಗಳೇ ಪ್ರಧಾನ ಉತ್ಪನ್ನಗಳು ಎನ್ನುತ್ತಾರೆ ಈ ಸೋದರರಲ್ಲಿ ಒಬ್ಬರಾದ ಪ್ರವೀಣ್.

ಈ ಉತ್ಪನ್ನಗಳನ್ನು ತಯಾರಿಸಲು ಮಲೆನಾಡು ಗಿಡ್ಡ ಮತ್ತು ಹಳ್ಳಿಕಾರ್ ತಳಿಯ ದೇಸಿ ಹಸುಗಳ ಗೋಮಯವನ್ನೇ ಬಳಸಲಾಗುತ್ತದೆ. ಎಚ್‌ಎಫ್‌ ಅಥವಾ ಜೆರ್ಸಿ ತಳಿ ಹಸುಗಳ ಗೋಮಯದಿಂದ ತಯಾರಿಸಲು ಆಗದು ಎನ್ನುತ್ತಾರೆ.




ಪ್ರವೀಣ್‌, ಪ್ರತಾಪ್ ಮತ್ತು ಪ್ರದೀಪ್ ಎಂಬ ಈ ಮೂವರು ಸೋದರರು ತಮ್ಮ ಅನುಭವವನ್ನು ವಿವರಿಸುವುದು ಹೀಗೆ.... 

ಬೆಂಗಳೂರು ನಗರದಲ್ಲಿದ್ದುಕೊಂಡು ದೇಸಿ ಹಸುಗಳನ್ನು ಸಾಕುತ್ತಿರುವ ಶ್ರೀ ಕುಮಾರ ಸುಬ್ರಹ್ಮಣ್ಯ ಜಾಗೀರ್‌ದಾರ್ ಅವರೇ ತಮಗೆ ಈ ನಿಟ್ಟಿನಲ್ಲಿ ಪ್ರೇರಣೆಯಾಗಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಂಡು ನಮಗೂ ಮಾರ್ಗದರ್ಶನ, ಬೆಂಬಲ ನೀಡಿದ್ದಾರೆ ಎನ್ನುತ್ತಾರೆ ಈ ಸೋದರರು.




















Tags: Gau maya deepa, Gau maya products, Cow dung products, ಗೋಮಯ ಉತ್ಪನ್ನಗಳು, ಕಲಾಕೃತಿಗಳು,

Post a Comment

أحدث أقدم