ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಕವನ- ತಾಳ್ಮೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಕವನ: ತಾಳ್ಮೆ  

ರಚನೆ:  ಡಾ.ಕಲಾಧರ, ಮಂಡ್ಯ..

ರಾಗ-ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್, ಮಂಡ್ಯ.


ತಾಳ್ಮೆ


ಮನದ ಕೊಳದೊಳಗೆ ಭಾವಗಳು ಕದಡಿರಲು

ತಿಳಿಗೊಳದ ತಳವ ಇಣುಕಿ ನೋಡು/

ಬಗ್ಗಡವು ಘನವಾಗಿ ತಳವ ಸೇರುವ ಹಾಗೆ 

ಮನವು ತಿಳಿಯಾಗುವುದು ಕಾದು ನೋಡು//


ಮನದೊಳಗೆ ಆವರಿಸೆ ಶೂನ್ಯ ಭಾವದ ನಿಶೆಯು

ರಾತ್ರಿಯಾ ನಭದತ್ತ ಒಮ್ಮೆನೋಡು/

ಚಂದ್ರಮನ ಹುಡುಕುತ್ತ ತಾರೆ ಮಿನುಗುವ ಹಾಗೆ

ಮನದ ಮೂಲೆಯ ಬೆಳಕ ಹುಡುಕಿ ನೋಡು//


ಕಹಿ ನೆನಪುಗಳ ನೆನಪು ಮನದಿ ವಿಪ್ಲವ ಮಾಡೆ, 

ಹೂದೋಟದಲ್ಲೊಮ್ಮೆ ಕುಳಿತು ನೋಡು/

ಮುಳ್ಳ ಗಿಡದಲಿ ಬಿರಿವ ಚೆಂಗುಲಾಬಿಯ ಹಾಗೆ

ಸವಿ ನೆನಪುಗಳ ಅರಸಿ ಸವಿದು ನೋಡು //


        -  ಕಲಾಧರ


1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು