ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಶುಭೋದಯ-19 ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



 ಇರುಳಿನಲಿ ಸಾಗಿದ ಮಂಡೂಕಸಂಗೀತ 

ನಿಶೆಕಳೆದು ಅರುಣನುದಯಕೆ ಧ್ಯಾನಸ್ಥವಾಗುವಲ್ಲಿ

ಪುಟಪಲ್ಲಟದಲಿ ಪುಟಿದೆದ್ದ ಭಾಸ್ಕರಗೆ 

ನವೋನ್ಮೇಷ ಸ್ವಾಗತದ ಮುದಮುಂಜಾವು. 

*ಸುಪ್ತದೀಪ್ತಿ.

******

ಬಾನಿಗೆಲ್ಲ ಹೊದೆಸಿದ ಬೂದು ಚಾದರ 

ಅದರಾಚೀಚೆ ಬೆಚ್ಚಗೆ ಕಣ್ಣುಕೂರುವ 

ಮಧ್ಯಾಹ್ನದ ನೇಸರ ಮತ್ತು ಬೇಸರ. 

*ಸುಪ್ತದೀಪ್ತಿ.

*******

ಬಿಸಿಲಿಳಿದು ಬೆವರಿಳಿದು 

ನೆಲದೆಸೆಗೆ ಹನಿಯಿಳಿದು 

ತಂಪೆಂದು ಹಂಬಲಿಸಿ 

ಕಪ್ಪೆರಾಗ ಹಾಡುವಿರುಳು. 

*ಸುಪ್ತದೀಪ್ತಿ.

Post a Comment

ನವೀನ ಹಳೆಯದು