ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅಡುಗೆ ಮನೆಯಲ್ಲೇ ಸಿಗುವ ಅಗ್ಗದ ಔಷಧ ಕೊತ್ತಂಬರಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ನಾವು ಮಾರುಕಟ್ಟೆಯಲ್ಲಿ ಖರೀದಿಸುವ ಅಗ್ಗದ ಬೆಲೆಯ ತರಕಾರಿ ಅಥವಾ ಸೊಪ್ಪು ಎಂದರೆ ಈ ಕೊತ್ತಂಬರಿ. ಇದನ್ನು ಧನಿಯಾ ಎಂದು ಕೂಡ ಕರೆಯಲಾಗುತ್ತದೆ. ಬಹುಮುಖ್ಯವಾಗಿ ಅನೇಕ ಔಷಧಿ ಸತ್ವಗಳನ್ನು ಹೊಂದಿದೆ.

ಇದರ ಸೊಪ್ಪು ಮಾತ್ರವಲ್ಲದೆ ಕೊತ್ತಂಬರಿ ಬೀಜ ಕೂಡ ಅಡುಗೆಗೆ ಬಹುಮುಖ್ಯ ಸಾಂಬಾರ ಪದಾರ್ಥ. ಇದರಲ್ಲಿ ಆಂಟಿಬಯೋಟೆಕ್ ಅಂಶ ಹೇರಳವಾಗಿದೆ. ಸುಗಂಧಭರಿತವಾಗಿರುವ ಈ ಗಿಡದ ಎಲ್ಲಾ ಭಾಗವನ್ನು ನಮಗೆ ಬೇಕಾದ ರೀತಿಯಲ್ಲಿ ಬಳಸಬಹುದು. 

ವಿಟಮಿನ್ ಸಿ ಅಂಶವನ್ನು ಒಳಗೊಂಡಿರುವ ಇದನ್ನು ತ್ವಚೆಯ ಆರೋಗ್ಯ ಕಾಪಾಡಲು ಮತ್ತು ಬೊಜ್ಜು ಕರಗಿಸಲು ಉಪಯೋಗವಾಗುತ್ತದೆ. ಅಷ್ಟೇ ಅಲ್ಲದೆ ಚರ್ಮ ರೋಗಗಳ ನಿವಾರಣೆಗೆ ಇದರ ಜ್ಯೂಸ್ ಅತ್ಯಂತ ಪರಿಣಾಮಕಾರಿ. ಇದರ ಸೊಪ್ಪಿನಿಂದ ಚರ್ಮದ ಮೇಲಿರುವ ಕಲೆಯನ್ನು ಹೋಗಲಾಡಿಸಿ ಹೆಚ್ಚು ಕಾಂತಿಯುತವಾಗಿರುವಂತೆ ಮಾಡುತ್ತದೆ.

ಕೊತ್ತಂಬರಿ ಸಸ್ಯದಲ್ಲಿ ಇರುವ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಇದರಲ್ಲಿ ಕಬ್ಬಿಣಾಂಶವು ಕೂಡ ಅಧಿಕವಾಗಿದೆ. ಹಾಗಾಗಿ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚು ಮಾಡುತ್ತದೆ. 

ಹೀಗೆ ಮನೆಯಲ್ಲಿ ದಿನನಿತ್ಯ ಬಳಸುವ ಅನೇಕ ಪದಾರ್ಥಗಳ ಔಷಧೀಯ ಗುಣದ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಇದರಿಂದ ನಮಗೆ ಅನೇಕ ರೀತಿಯ ಲಾಭಗಳಿವೆ. ಮತ್ತು ಆರೋಗ್ಯಕ್ಕೆ ಬೇಕಾದ ಅಂಶಗಳ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

-ಅರ್ಪಿತಾ ಕುಂದರ್

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು