ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಅಪ್ಪನ ಪಂಚ ಮುಕ್ತಕ- ವಿಶ್ವ ಅಪ್ಪಂದಿರ ದಿನದ ನೆನಪಿಗಾಗಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಅಪ್ಪನೆನ್ನಲು ನನಗೆ ನಿತ್ಯವೂ ಬಲುಸುಖವು 

ಅಪ್ಪಟದ ವಾತ್ಸಲ್ಯಮೂರ್ತಿ ನಮಗವರು | 

ಒಪ್ಪವಾಗಿಯೆ ಸಲಹಿ ನೀಡುವರು ಸುಜ್ಞಾನ  

ತಪ್ಪಿದರೆ ತಿದ್ದುವರು - ಪುಟ್ಟಕಂದ ||  


ಅಪ್ಪನೆಂದರೆ ಸಲುಗೆ ಅಪ್ಪನೆಂದರೆ ಭಯವು  

ಅಪ್ಪನೆಂದರೆ ಬಹಳ ಗೌರವವು ನಮಗೆ| 

ಅಪ್ಪನೇ ಸರ್ವಸ್ವ ಅಮ್ಮನಿಗು ಆಧಾರ 

ಅಪ್ಪಮ್ಮ ಗುರು ನಮಗೆ - ಪುಟ್ಟಕಂದ || 


ಅಪ್ಪನೇ ಆದರ್ಶ ಮಕ್ಕಳಿಗೆ ಜೀವನದಿ 

ಅಪ್ಪಿ ಮುದ್ದಾಡುತಿಹ ವಾತ್ಸಲ್ಯಮೂರ್ತಿ | 

ಒಪ್ಪುವಂತಹ ಕೆಲಸ ಮಾಡಿದರೆ ಸಂತಸದಿ 

ತುಪ್ಪಶನ ಉಣಿಸುವರು - ಪುಟ್ಟಕಂದ ||

 


ನನ್ನಪ್ಪ ನನಗಿಷ್ಟ ಅಮ್ಮನಿಗು ಬಲುಇಷ್ಟ   

ಚಿನ್ನದೊಡವೆಗು ಮಿಗಿಲು ನನಗೆ ನನ್ನಪ್ಪ |

ಜೊನ್ನಮಾಮನ ತೋರಿ ಮುದ್ದಿಪರು ನನ್ನಪ್ಪ 

ಮನ್ನಿಪೆನು ನಾನವರ - ಪುಟ್ಟಕಂದ ||   


ಮಕ್ಕಳಿಗೆ ಜೀವನದಿ ಅಪ್ಪನೇ ಪಥದರ್ಶಿ  

ಸಕ್ಕರೆಯ ಸಿಹಿಯಿತ್ತು ಮಮತೆ ಮಳೆಗರೆವ | 

ಹೊಕ್ಕುಳದ ಬಂಧವನು ಮರೆಯಲಸದಳ ನಮಗೆ 

ದಕ್ಕಿದರದು ಶ್ರೇಷ್ಠ  - ಪುಟ್ಟಕಂದ  ||  

( ಛಂದೋಬದ್ಧ ಮುಕ್ತಕ) 

-ವಿ.ಬಿ.ಕುಳಮರ್ವ , ಕುಂಬ್ಳೆ

ಹಾಡಿದವರು:- ಕಲಾಶ್ರೀ ವಿದ್ಯಾಶಂಕರ್ ಮಂಡ್ಯ.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು