ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಗಳು- ಜೀವ ಭಾವ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಜೀವನದ ನದಿಯಲ್ಲಿ ದೋಣಿಯಾತ್ರೆಯ ಮಾಡಿ  

ಭಾವನೆಯ ಕಣಜವನು ತುಂಬಿ ನೀವೆಲ್ಲ | 

ಕಾವದೇವನ ಭಜಿಸಿ ಹರಕೆಯನು ಪಡೆದಿರಲು  

ಭಾವಿ ಜೀವನ ಸುಖವು - ಪುಟ್ಟಕಂದ || ೧ || 


ದೋಣಿಯೆಂದರೆ ಬದುಕು ಅಂಬಿಗನೆ ಭಗವಂತ  

ಕಾಣಬೇಕವನ ಮಹತಿಯನು ನೀವೆಲ್ಲ | 

ಬಾಣಿಯೊಳಗೂ ಇರುವ ಭಗವಂತ ಜಗದೊಡೆಯ 

ಕೇಣವಿಲ್ಲದೆ ನೋಡೆ - ಪುಟ್ಟಕಂದ || ೨ ||  


ಜೀವನವು ನೀರನೊರೆ ಶಾಶ್ವತಕೆ ಉಳಿಯುವುದೆ 

ಭಾವಿಪೊಡೆ ನಶ್ವರವು ಜೀವಭಾವನೆಯು |  

ದೇವರನು ನಂಬಿದರೆ ಮಾನವಗೆ ಕೈವಶವು 

ಸಾವು ಬದುಕಿನ ದಾಳ - ಪುಟ್ಟಕಂದ || ೩ ||   


ನಾವಿಕನು ದೋಣಿಯನು ಮುನ್ನಡೆಸೆ ಗುರಿಯೆಡೆಗೆ  

ದೇವನೇ ತಲಪಿಸುವ ಇನ್ನೊಂದು ದಡಕೆ |  

ಹಾವಿನೊಲು ಪೊರೆಕಳಚಿ ಕಳ್ಳಾಟವಾಡದರೆ

ಭಾವನಗೆ ಬಲವಿಹುದೆ - ಪುಟ್ಟಕಂದ || ೪ ||

    


ಹಾಲು ಮೊಸರಾಗಿ ಬೆಣ್ಣೆ ಘೃತ ಮಜ್ಜಿಗೆ ಸಿಗಲು  

ಮೇಲೆ ಪರಿಶುದ್ಧ ಪರಿಮಳದ ಬಿಳಿಯಿಹುದು | 

ಸಾಲುಕಷ್ಟವೆ ಬರಲು ಸೊರಗದಿಹ ಮನುಜನಿಗೆ  

ಕಾಲವೊಳಿತೆಸಗುವುದು - ಪುಟ್ಟಕಂದ || ೫ || 


ಕಾಮಕ್ರೋಧವ ಮಣಿಸಿ ಧೇನುಗಳ ಸಲಹಿದರೆ  

ಧಾಮದಲಿ ಬಲುಸುಖವು ಒಲಿದು ಬರಬಹುದು | 

ರಾಮಚಂದ್ರನ ನೆನೆಯೆ ರಾಕ್ಷಸತೆ ಅಳಿಯುವುದು   

ಸೋಮಶೇಖರ ಹರಸೆ - ಪುಟ್ಟಕಂದ || ೬ || 

( ಗಜಪ್ರಾಸವಿರುವ ಛಂದೋಬದ್ಧ ಆಶು ಮುಕ್ತಕಗಳು)

ರಚನೆ: ವಿ.ಬಿ.ಕುಳಮರ್ವ , ಕುಂಬ್ಳೆ

ರಾಗಸಂಯೋಜನೆ ಮಾಡಿ ಹಾಡಿದವರು ಕಲಾಶ್ರೀ ವಿದ್ಯಾಶಂಕರ್ ಮಂಡ್ಯ

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

ನವೀನ ಹಳೆಯದು