ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಕತ್ರಯ- ಸಹಜ ನೀತಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ

ರಾಗಸಂಯೋಜನೆ ಮಾಡಿ ಹಾಡಿದವರು :- ಶ್ರೀ ಆನಂದತೀರ್ಥ




ಪರಸೊತ್ತ ಬಯಸಿದರೆ ಸೊಗವಿರದು ಮನುಜರಿಗೆ  

ವರವಾಗದದುವೆ ಶಾಪವೆನಿಸಲು ಬಹುದು |  

ಬರಿದೆ ಕಳೆವರು ಕೈಲಿರುವ ವಸ್ತುಗಳನವರು 

ಮರಬಿಟ್ಟ ಮಂಗನೊಲು - ಪುಟ್ಟಕಂದ || ೧ || 


ನಾವು ದುಡಿಯಲು ಬೇಕು ಸಂಪಾದಿಸಲು ಬೇಕು  

ನೋವ ಮರೆಯುತ ಸೊಗದಿ ಬದುಕಿರಲು ಬೇಕು | 

ಗೋವ ಸಲಹಲು ಬೇಕು ಆರೋಗ್ಯವಿರಬೇಕು  

ದೇವರಿಗೆರಗ ಬೇಕು - ಪುಟ್ಟಕಂದ || ೨ ||  


ಮನ ಮಲಿನಗೊಳಿಸದಿರು ಧನಗಳಿಸಲೆಳಸದಿರು  

ತನುವ ಪೋಷಣೆಯಿರದೆ ಬರಿದೆ ಕೊರಗದಿರು | 

ಇನಕುಲದ ರಾಮನನು ಪೂಜಿಸುತ ನಮಿಸಿದರೆ 

ಕನಸು ನನಸಾಗುವುದು - ಪುಟ್ಟಕಂದ || ೩ ||  

(ಛಂದೋಬದ್ಧ ಆಶು ಮುಕ್ತಕ ತ್ರಯ) 


-ವಿ.ಬಿ.ಕುಳಮರ್ವ, ಕುಂಬ್ಳೆ 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

أحدث أقدم