ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಕ- ಗಾಯನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಆಲಿಸಿ: ಮುಕ್ತಕ- ಗಾಯನ



ಧೀರತಮ್ಮನ ಕಬ್ಬ


ಧೀರತಮ್ಮನ ಕಬ್ಬ ಓದುತ್ತ ಕುಳಿತಿರಲು

ಮಾರುಹೋದೆನದರಾ ಸತ್ತ್ವಸಂಪದಕೆ

ಚಾರುಮತಿಗಾಹಾರವಿರುವಂಥ ಹೊತ್ತಗೆಯು 

ದಾರಿತೋರಲು ಜನಕೆ - ಲಕುಮಿರಮಣ ||


ವರಗುರುವು ಕುಳಮರ್ವ ಬರೆದಿರುವ ಮುನ್ನುಡಿಯು

ಅರವಿಂದ ಚೊಕ್ಕಾಡಿಯವರ ಬೆನ್ನುಡಿಯು

ಹಿರಿಕವಿಗಳಿತ್ತಿಹರು ಹಾರೈಕೆ ನುಡಿಗಡಣ 

ಮೆರುಗಿತ್ತ ಕಬ್ಬವಿದು - ಲಕುಮಿರಮಣ||


ಒಳ್ನುಡಿಯನೊರೆದಿರುವ ಮುಕ್ತಕವು ಹಲವಿಹುದು 

ನಲ್ನುಡಿಯ ಬರಹಗಳು ಮುದವಹುದು ನಮಗೆ 

ಬೆಳ್ನುಡಿಯ ನವಿರಾದ ನೀತಿಯಿದೆ ಲೋಗರಿಗೆ 

ಸೂಳ್ನುಡಿಯನರ್ಥೈಸೆ - ಲಕುಮಿರಮಣ ||


ಗುರುಭಕ್ತಿ ನಂಬಿಕೆಯು ಬೆಳಕಿನೆಡೆ ಪಯಣವನು

ನೆರವೀವ ಹೃದಯದಲಿ ಸನ್ನಡತೆ ಕಂಡು 

ಹಿರಿದಾದ ಕಾಯಿಲೆಗೆ ಔಷಧಿಯ ಪೇಳ್ವಂತೆ 

ಬರೆದಿಹರು ಮುಕ್ತಕವ - ಲಕುಮಿರಮಣ||


ಗೌರವದಿ ಮುಕ್ತಕದ ಪುಸ್ತಕವನಿತ್ತಿಹರು 

ಸಾರವಡಗಿದೆಯಲ್ಲಿ ಬರಹಗಳ ಮಾಲೆ

ಹಾರವಾಗಿದೆ ತಾಯಿ ಸರಸತಿಯ ಕಂಠಕ್ಕೆ

ಭಾರವಾಗದು ಹಾರ - ಲಕುಮಿರಮಣ ||


ಲಕ್ಷ್ಮೀ ವಿ ಭಟ್, ಮಂಜೇಶ್ವರ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು