ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಾವಗೀತೆ- ಮಲ್ಲಿಗೆ ಮಾತು... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮುಂಜಾನೆಯ

ಹೂ ಬಿಸಿಲಲಿ

ಹಾಲು ಬಿಳುಪಿನ

ಚೆಲುವೆ ಬುಟ್ಟಿ

ತುಂಬ ಹೂವ

ಮಾರಲು ಬಂದಿಹಳು


ಹೂರಣದ ಅರಸಿ

ಮಾತಿನ ಸರಸಿ

ಹೆಸರು ವಿಲಾಸಿ

ಇವಳೇ ಹೂವಾಡಗಿತ್ತಿ

ಪ್ರೀತಿಯಲ್ಲಿ ಕರೆಯುವರು

ವಸಂತಿ.... ವಸಂತಿ...


ಅವಳ ಮನಸಿರಿಯ ಕರೆಗೆ

ಬುಟ್ಟಿಯಲಿ ನಗುವ ಮಲ್ಲಿಗೆ

ಮುಡಿಯಲ್ಲಿ ಮೆಲ್ಲಗೆ

ಬಿರಿವ ನಗುವ ಚೆಲ್ಲಿ

ಘಮಘಮಿಸುವ ಹೂವೇ

ಆ ಮಲ್ಲಿಗೆ ನಾನೆಂದಿತು


ಹಸಿರೆಲೆ ಮರೆಯಲಿ

ಹೂ ಮನದ ಕನ್ನಿಕೆ

ಗುಡಿಯಲಿ ಮುಡಿಯಲಿ

ನೀನಿಲ್ಲದೆ ಏನಿದೆ

ತನುವರಳಿಸಿ ಮನದ

ಮೂಲೆ ಮೂಲೆಯಲೂ

ಘಮದ ಪಿಸುಮಾತನಾಡಿ

ನಲಿವ ನೀನು ನೀನೆ..!


• ಚಂದ್ರಹಾಸ ಕೋಟೆಕಾರ್


(ಕನ್ನಡ ಸಾಪ್ತಾಹಿಕ ಪತ್ರಿಕೆಗಳ ಪೈಕಿ ಬಹಳ ಜನಪ್ರಿಯತೆ ಪಡೆದಿದ್ದು, ಈಗ ಕಾಲದ ಹೊಡೆತಕ್ಕೆ ಸಿಲುಕಿ ಪ್ರಕಟಣೆ ನಿಲ್ಲಿಸಿರುವ ಮಂಗಳ ವಾರಪತ್ರಿಕೆಯಲ್ಲಿ ಹಿಂದೊಮ್ಮೆ ಪ್ರಕಟವಾಗಿದ್ದ ಕವನವಿದು)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

ನವೀನ ಹಳೆಯದು