ದೇವಕಿ ಕಂದನು ಜನಿಸಿದನಿಂದು
ಮಾವ ಕಂಸನ ವಧಿಸಲಿಕೆ |
ದುಷ್ಟರ ಮರ್ದನ ಮಾಡುತಲವನು
ಶಿಷ್ಟರ ಬಿಡದೇ ಸಲಹುವನು ||
ಅಷ್ಟಮಿ ರೋಹಿಣಿ ಪರ್ವದ ಕಾಲದಿ
ಕೃಷ್ಣನು ಧರೆಗವತರಿಸಿದನು |
ವೃಷ್ಟಿಯು ಸುರಿಯಿತು ದೇವರು ಜನಿಸಲು
ಕಷ್ಟಗಳೆಲ್ಲವ ಪರಿಹರಿಸೆ ||
ಎಂಟನೆ ವಸುವು ಜನಿಸಿದ ತಾಣವು
ಶುಂಠ ಕಂಸನ ಸೆರೆಮನೆಯು |
ನೆಂಟನು ತಾನೆಂಬುದ ನೋಡದೆ
ಕಂಠೀರವನನು ವಧಿಸಲು ಹೊರಟ ||
ಲೋಕದ ಗುರುವನು ಕೊಲ್ಲುವುದುಂಟೆ
ಧೂರ್ತಕಂಸನು ತಿಳಿಗೇಡಿ |
ನಾಕವ ನರಕವನೊಂದೂ ಬಿಡದೆ
ಮೂರಡಿ ಮಾಡಿದ ವೀರನನು||
ಇಂದಿದೊ ಬಂದಿದೆ ಕೃಷ್ಣಾಷ್ಟಮಿಯು
ದೇವರು ಜನಿಸಿದ ಶುಭದಿನವು |
ಬಯಸುವೆ ನಾನಿದೊ ಬಳಗದ ನಿಮಗೆ
ಹಬ್ಬದ ಸಂಭ್ರಮ ಶುಭವನ್ನು||
ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ವಸುದೇವ ಸುತಂ ದೇವಂ
ಕಂಸ ಚಾಣೂರ ಮರ್ದನಂ
ದೇವಕೀ ಪರಮಾನಂದಂ
ಕೃಷ್ಣಂ ವಂದೇ ಜಗದ್ಗುರುಂ
ಆಶುಕವನ ರಚನೆ:- ವಿ.ಬಿ.ಕುಳಮರ್ವ, ಕುಂಬ್ಳೆ
ಹಾಡಿದವರು :- ಕು| ಅವನಿಶ್ರೀ ಕುಳಮರ್ವ
ಕಾಮೆಂಟ್ ಪೋಸ್ಟ್ ಮಾಡಿ