ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮರೆಯುವ ಮುನ್ನ: ಎತ್ತು-ಕೋಣಗಳಿಂದ ಸಾಂಪ್ರದಾಯಿಕ ಗದ್ದೆ ಉಳುಮೆಯ ಅಪರೂಪದ ದೃಶ್ಯ (ವೀಡಿಯೋ) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮೂವತ್ತು-ನಲುವತ್ತು ವರ್ಷಗಳ ಹಿಂದೆ ಸಾಮಾನ್ಯವಾಗಿ ಕಾಣಸಿಗುತ್ತಿದ್ದ ಭತ್ತದ ಕೃಷಿಯ ಸಾಂಪ್ರದಾಯಿಕ ಗದ್ದೆ ಉಳುಮೆಯ ದೃಶ್ಯ ಇಂದು ಅತ್ಯಂತ ಅಪರೂಪವಾಗಿದೆ. ಕೃಷಿಯ ಯಾಂತ್ರೀಕರಣ ಮತ್ತು ಆಧುನೀಕರಣದ ಹೆಸರಲ್ಲಿ ಸಹಜವಾಗಿದ್ದ ಪದ್ಧತಿಯೊಂದು ಅಳಿವಿನಂಚಿಗೆ ಬಂದಿದೆ.

ಯಂತ್ರಗಳನ್ನು ಮತ್ತು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸಿ ಬೃಹತ್ಪ್ರಮಾಣದಲ್ಲಿ ಕೃಷಿ ಮಾಡುತ್ತಿರುವುದರ ಹಲವು ದುಷ್ಪರಿಣಾಮಗಳು ಈಗಾಗಲೇ ಸಾಕಷ್ಟು ಗೋಚರವಾಗಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ, ಪ್ರಕೃತಿ ಸ್ನೇಹಿ ಕೃಷಿ ಪದ್ಧತಿಯತ್ತ ಕೆಲವರಾದರೂ ಮರಳುತ್ತಿದ್ದಾರೆ.

ಹಾಗಿದ್ದರೂ ಸಮಾಜದಲ್ಲಿ ಮತ್ತೆ ಗೋಸಂರಕ್ಷಣೆ, ಪಶು ಸಂಪತ್ತಿನ ಸದ್ಬಳಕೆಯ ಜಾಗೃತಿ ಮೂಡುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಬಂದ ಸಾಂಪ್ರದಾಯಿಕ ಗದ್ದೆ ಉಳುಮೆ ದೃಶ್ಯವೊಂದು ಇಲ್ಲಿದೆ.

ನಮ್ಮೆಲ್ಲರ ಬಾಲ್ಯದಲ್ಲಿ ಇಂತಹ ದೃಶ್ಯಗಳನ್ನು ನೋಡಿ, ಪಾಲ್ಗೊಂಡು ಸಂಭ್ರಮಿಸಿದ್ದರೂ ಈಗ ಮತ್ತೊಮ್ಮೆ ನೆನಪಿಸಿಕೊಳ್ಳುವ ಪ್ರಯತ್ನವಾಗಿ ಹಾಗೂ ನವಪೀಳಿಗೆಯ ಓದುಗರಿಗೆ ಹೀಗೊಂದು ಪದ್ಧತಿ ಇತ್ತು ಎಂಬುದನ್ನು ತೋರಿಸಿಕೊಡುವುದಕ್ಕಾಗಿ ಉಪಯುಕ್ತ ನ್ಯೂಸ್ ಈ ವೀಡಿಯೋವನ್ನು ಇಲ್ಲಿ ಬಿತ್ತರಿಸುತ್ತಿದೆ.




Post a Comment

أحدث أقدم