ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ಫೋಟೋ ಗ್ಯಾಲರಿ) ಗೋಮಯ ಉತ್ಪನ್ನಗಳ ತಯಾರಿಗೆ ರಾಷ್ಟ್ರೀಯ ಕಾಮಧೇನು ಆಯೋಗ ತರಬೇತಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಈ ಬಾರಿ ದೀಪಾವಳಿಯನ್ನು ಗೋಮಯದಿಂದ ತಯಾರಿಸಿದ ಹಣತೆಗಳೊಂದಿಗೆ ಆಚರಿಸಲು ವ್ಯಾಪಕ ಸಿದ್ಧತೆ ನಡೆದಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ವತಿಯಿಂದ ಗೋಮಯ ಹಣತೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತಿದ್ದು, ಒಟ್ಟಾರೆ 11 ಕೋಟಿಗೂ ಅಧಿಕ ಗೋಮಯ ಹಣತೆಗಳನ್ನು ಬೆಳಗಿಸಲು ಯೋಜನೆ ರೂಪಿಸಲಾಗಿದೆ.

ಗಣೇಶನ ಹಬ್ಬವನ್ನೂ ಪರಿಸರ ಸ್ನೇಹಿ ಗೋಮಯ ಗಣೇಶ ಮೂರ್ತಿಯಿಂದ ಆಚರಿಸುವ ಕಲ್ಪನೆಯನ್ನು ಪರಿಚಯಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಗೋಮಯ ಹಣತೆಗಳಿಂದ ಆಚರಿಸುವ ಚಿಂತನೆಗೆ ಬಲ ದೊರೆತಿದೆ.

ಗೋಶಾಲೆಗಳಲ್ಲಿ ಗೋಮಯದಿಂದ ಹಣತೆಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದ್ದು, ಅಗತ್ಯ ಯಂತ್ರೋಪಕರಣಗಳನ್ನು ಗೋಶಾಲೆಗಳಿಗೆ ಒದಗಿಸಲಾಗುತ್ತಿದೆ.

ಗೋಮಯದಿಂದ ಬರೀ ಗಣೇಶನ ಮೂರ್ತಿ ಮತ್ತು ಹಣತೆಗಳಷ್ಟೇ ಅಲ್ಲ, ಇನ್ನೂ ಹಲವಾರು ಆಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿ, ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಗೋಮಯ ಬಳಸಿ ತಯಾರಿಸಿದ ಆಲಂಕಾರಿಕ ಕಲಾಕೃತಿಗಳು, ಗೋಮಯ ಧೂಪ- ಇನ್ನೂ ಹಲವು ವಸ್ತುಗಳ ಒಂದು ಝಲಕ್‌ ಇಲ್ಲಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ವತಿಯಿಂದ ಒದಗಿಸಲಾದ ಈ ಚಿತ್ರಗಳನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಕಲಾಕೃತಿಗಳು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೂವರು ಸಹೋದರರಾದ ಪ್ರವೀಣ್, ಪ್ರತಾಪ್ ಮತ್ತು ಪ್ರದೀಪ್ ಅವರು ತಯಾರಿಸಿದವುಗಳು.





ಈ ಕಲಾಕೃತಿಗಳಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದ್ದು, ಗೋಶಾಲೆಗಳ ನಿರ್ವಹಣೆಗೆ ಅಗತ್ಯವಿರುವ ಸಂಪನ್ಮೂಲವನ್ನು ಈ ಕಲಾಕೃತಿಗಳ ಮಾರಾಟದಿಂದ ಕ್ರೋಡೀಕರಿಸಬಹುದಾಗಿದೆ. ಅಲ್ಲದೆ ದೊಡ್ಡ ಮಟ್ಟದಲ್ಲಿ ಗೋವುಗಳನ್ನು ಸಾಕುವ ರೈತರಿಗೂ ಗೋಮಯದಿಂದ ನಾನಾ ಕಲಾಕೃತಿಗಳನ್ನು ತಯಾರಿಸುವ ವಿಧಾನ ಹೆಚ್ಚಿನ ಆದಾಯ ತಂದುಕೊಡಲಿದೆ. ಆ ಮೂಲಕ ಆತ್ಮ ನಿರ್ಭರ ಭಾರತದ ಕಲ್ಪನೆಯ ಸಾಕಾರಕ್ಕೆ ಹೊಸ ಬಲ ದೊರಕುತ್ತದೆ. ದೇಶದ ರೈತರು, ಗೋಪಾಲಕರು ಆರ್ಥಿಕವಾಗಿ  ಸದೃಢರಾದರೆ ಈಗ ಹೊರಳು ದಾರಿಯಲ್ಲಿ ನಿಂತಿರುವ ದೇಶದ ಅರ್ಥವ್ಯವಸ್ಥೆ ಹೊಸ ಪಲ್ಲಟದೊಂದಿಗೆ ಮತ್ತಷ್ಟು ಸದೃಢವಾಗಿ ಬೆಳೆಯಲಿದೆ.

Post a Comment

أحدث أقدم