ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ನುಡಿನಮನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ನಿನ್ನೆ ನಿಧನರಾದ ಡಾ| ಕೃಷ್ಣ ಮೂರ್ತಿ ಅಮೈ ಅವರಿಗೆ ಅರ್ಪಿತ



ತನ್ನ ತಾನರಿಯುತ ಅರಿದುದರಲಿ ಮನವು ಸ್ಥಿರತೆಯಲಿರ್ಪ ಕೌಶಲ್ಯಂಗಳನೆತ್ತರಿಸುವ ಕಲೆಯಕಲಿಕೆಯೇ ವಿದ್ಯೆ.

ತನ್ನ ತಾನರಿತರೂ ಕೌಶಲ್ಯಂಗಳ ಕೊರತೆಯಿಂ ಮನವು ಅಸ್ತಿರತೆಯಲಿರ್ಪುದಾದರದೇ ಪಾಂಡಿತ್ಯ- 

ತನ್ನ ತಾನರಿತು ಅದರ ಕೌಶಲ್ಯಗಳಿಂದಳವಡಿಪ ಧೀರ............

ತನ್ನಂತೆ ಪರರ ಕಾಣ್ಪುದು ದಿಟ.......

ಇಂತಿರ್ದೊಡೆ ಅವ ಇಹಪರ ಭೇದವೆಣಿಸದೇ......

ಮನದ ಅಧಿಪತಿಯಾದ ಜಗದೀಶನ ಕೈಲಾಸದೊಳಗಿರ್ದಂತೆ-

ತನ್ನ ತಾನರಿತ ಧೀರನೆದೆಯಾಗುವುದು ಜಗದಗಲ........

ತಾನೇ ಎಲ್ಲರೊಳು ಎಲ್ಲರೂ ತನ್ನೊಳಗೆಂಬಂತಾಗಿ...

ಕರ್ಮಯೋಗಿಯಾಗುವನಾಗಿ ದುಡಿವನವ.........

ಲೋಕದುರಿತಂಗಳ ಕಳೆಯುವ ಕಾರ್ಯಂಗಳಲಿ

           

- ಶ್ಯಾಮ ಪ್ರಸಾದ್ ಮುದ್ರಜೆ

ಮೇಲಿನ ಹಾಡು ಹಾಡಿದವರು - ವಿದೂಷಿ ಮನೋರಮ ಬೆಂಗಳೂರು.

ಮೋಹನ ಕಲ್ಯಾಣಿ ರಾಗ, ಆದಿ ತಾಳ

Post a Comment

أحدث أقدم