ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಕನಕ-ಪುರಂದರ ದಾಸ ವರೇಣ್ಯರು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

ಆಶುಕವನ ರಚನೆ:- ವಿ.ಬಿ.ಕುಳಮರ್ವ, ಕುಂಬ್ಳೆ 

ರಾಗಸಂಯೋಜನೆ ಮಾಡಿ ಹಾಡಿದವರು:- ಗಮಕಿ ಕಲಾಶ್ರೀ ವಿದ್ಯಾಶಂಕರ ಮಂಡ್ಯ



ಕನಕ-ಪುರಂದರ 
    ~~~~ 
ಕನಕದಾಸರ ಭಕುತಿ ದಾಸ ಪುರಂದರ ಮುಕುತಿ  
ಒಂದರೊಳಗೊಂದು ಅವಿನಾಭಾವ ಶಕುತಿ||  

ಉಡುಪಿ ಕೃಷ್ಣನ ಭಜಿಸಿ ಇಷ್ಟಾರ್ಥ ಸಾಧಿಸಿದ  
ಕನಕದಾಸರ ನಮಿಸಿ ಧನ್ಯನಾದೆನು ನಾನು| 
ವಿಠಲ ದೇವರ ನಮಿಸಿ ಹೊಗಳಿ ಹಾಡಿದ ದಾಸ  
ಪುರಂದರರ ವಂದಿಸುತ ಕೃತಕೃತ್ಯನಾದೆ||  

ದಾಸರಿಬ್ಬರು ಒಂದೆ  ನಾಮಾಂಕಿತವು ಬೇರೆ  
ನೋಡಲಿಬ್ಬರದು ಚಿಂತನೆಯು ಒಂದೇ |  
ಹಾಡಿದರು ಭಜಿಸಿದರು ಸ್ತುತಿಸಿದರು ಮನಸಾರೆ  
ಸಂಭ್ರಮದಿ ಸಡಗರದಿ ಭಕುತಿ ಸಾಗರದಿ ||  

ಕಾಗಿನೆಲೆಯಾದಿ ಕೇಶವನ ನಂಬಿ ಭಜಿಸಿದರೆ 
ಬೇಗನೇ ತಾನೊಲಿದು ಹರಸುವನು ಶ್ರೀ ವಿಠಲ| 
ರಾತ್ರಿ ಹಗಲೆನದೆ ಹಸಿವು ತೃಷೆ ದಣಿವಿರದೆ  
ಮೈಮರೆತು ಹಾಡಿದರು ಹರಿಯ ದಾಸರಿವರು|| 

-ಕುಳಮರ್ವ 
 ತಾ -೨-೧೨-೨೦೨೦

Post a Comment

ನವೀನ ಹಳೆಯದು