ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಕ ಪಂಚಕ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




 ಮುಕ್ತಕ ಪಂಚಕಂ  

          ~~~~  

ಮನೆಯೊಳಗೆ ಮಕ್ಕಳನು ಮೇಣ್ ಹಿರಿಯಜೀವಿಗಳ 

ಮನತುಂಬಿ ಮಮತೆಯಲಿ ಸಲಹುತಿರ ಬೇಕು | 

ಧನಕನಕ ಲೆಕ್ಕವನು ತೊರೆದಿರಲು ಮನಹಗುರ 

ನಿನಗದುವೆ ಹರಿಸೇವೆ - ಪುಟ್ಟಕಂದ || ೧ || 


ಮಾತುಗಳು ಬರಬೇಕು ಹೃದಯದೊಳ ಸೆಲೆಯಾಗಿ 

ಖಾತೆಗಳ ತೆರೆಯಲಿಕೆ ಧನಕನಕ ಸಾಕು | 

ಮೋತೆ ಚೆನ್ನಾಗಿರಲು ಬಾಳೆಗೊನೆ ಹಸನಕ್ಕು 

ನೀತಿಯನು ತೊರೆಯದಿರು - ಪುಟ್ಟಕಂದ || ೨ ||  


ಓದಿನಲಿ ಅಭಿರುಚಿಯೆ ಇಲ್ಲದವ ಬರೆಯುವನೆ  

ಕಾದುವಿಕೆ ಬೇಡದವ ರಾಜನಾಗುವನೆ | 

ವಾದಮಾಡಲರಿಯದವ ವಕೀಲನೆನಿಸುವನೆ   

ವೇದವೋದಲು ವಿಪ್ರ - ಪುಟ್ಟಕಂದ || ೩ || 


ಭಾವನಾತ್ಮಕವಾದ ಬಂಧಗಳ ಚೌಕಟ್ಟು  

ಹಾವಭಾವವ ಮರೆತು ಶುದ್ಧವಾಗಿಹುದು |  

ಯಾವಕಾಲಕು ಅದುವೆ ಹೃದಯಗಳ ಬೆಸೆಯುವುದು  

ನೋವ ನೀಗುತ ಸುಖದಿ - ಪುಟ್ಟಕಂದ || ೪ || 


ಕಷ್ಟದಲಿ ಕಣ್ಣೀರ ಸುರಿಸುವಗೆ ಸಾಂತ್ವನಕೆ  

ಇಷ್ಟವಾಗುವ ಮಧುರ ಮಾತುಗಳು ಬೇಕು | 

ನಷ್ಟವನು ಕಳೆಯಲಿಕೆ ಧನವಿತ್ತು ಸಹಕರಿಸೆ  

ದುಷ್ಟನೂ ಶಿಷ್ಟನಹ - ಪುಟ್ಟಕಂದ || ೫ ||  


(ಆಶು ಛಂದೋಬದ್ಧ ಮುಕ್ತಕ)

ಇವುಗಳಲ್ಲಿ ಅನುಕ್ರಮವಾಗಿ   ೧.ಸಿಂಹಪ್ರಾಸ , ೨.ಗಜಪ್ರಾಸ , ೩.ಗಜಪ್ರಾಸ , ೪.ಗಜಪ್ರಾಸ, ೫.ಶರಭಪ್ರಾಸ ಬಂದಿರುತ್ತದೆ. 

-ವಿ.ಬಿ.ಕುಳಮರ್ವ , ಕುಂಬ್ಳೆ

ಸ್ವರ ಸಂಯೋಜನೆ ಮಾಡಿ ಹಾಡಿದವರು- ಶ್ರೀ ಬಾಲಕೃಷ್ಣ ಆಚಾರ್ಯ, ಪುತ್ತಿಗೆ

Post a Comment

ನವೀನ ಹಳೆಯದು