ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಕಗಳು- ವೇದವೆಂದರೆ ವಾದಗಳ ಮಂಥನದ ನವನೀತ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ವೇದವೆಂದರೆ ವಾದಗಳ ಮಂಥನದ ನವನೀತ 

ನಾದಗಳ ಮೂಲವನೆ ಕೀಲಿಸಿದ ಶಾಖೆ | 

ಭೇದವಿಲ್ಲದೆ ನಮಗೆ ತೋರುವುದು ತಿಳಿಬೆಳಕ 

ಬೋಧಿಪರು ಗುರು ನಿನಗೆ - ಪುಟ್ಟಕಂದ ||  


ವೇದವೆಂದರೆ ಆದಿಕಾವ್ಯಕ್ಕೆ ಸಮನಾದ  

ಬೋಧನೆಯ ನೀಡುತಿಹ ಜೀವನದ ಪಾಠ | 

ಸಾಧನೆಯ ಸಾರ ಸರ್ವಸ್ವವಲ್ಲಿರುವಾಗ 

ಮೇದಿನಿಯ ಜನಕೆ ವರ - ಪುಟ್ಟಕಂದ || 


ವೇದವೆಂದರೆ ನಿತ್ಯ ಶಾಶ್ವತದ ಮೌಕ್ತಿಕವು  

ಬಾದರಾಯಣನ ವರ ಜೀವಸಂಕುಲಕೆ | 

ಕೋದಿರುವ ವಾಕ್ಯಗಳು ಉಪನಿಷತ್ತಿನ ಸತ್ತ್ವ  

ಕಾದುವರ ತಿದ್ದುವುದು - ಪುಟ್ಟಕಂದ || 


ವೇದವೇ ನಾದಕ್ಕೆ ತಾಯಿಯೆಂದರೆ ಸತ್ಯ  

ನಾದವೇ ವೇದಕ್ಕೆ ಮೂಲವೆನೆ ನಿತ್ಯ | 

ಖೇದವನು ಮರೆಸಿಯಾಮೋದವನು ಸೃಜಿಸುವುದು 

ಸಾಧುಗಳು ಹರಸುವರು - ಪುಟ್ಟಕಂದ || 


- ವಿ.ಬಿ.ಕುಳಮರ್ವ , ಕುಂಬ್ಳೆ

ಹಾಡಿದವರು: ಬಾಲಕೃಷ್ಣ ಆಚಾರ್ಯ ಪುತ್ತಿಗೆ


Post a Comment

ನವೀನ ಹಳೆಯದು