ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಕಗಳು- ನಡವಳಿಕೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



 ಆಲಿಸಿ: ಮುಕ್ತಕಗಳು- ನಡವಳಿಕೆ

ರಚನೆ:  ವಿ.ಬಿ.ಕುಳಮರ್ವ ಕುಂಬ್ಳೆ

ರಾಗ- ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್, ಮಂಡ್ಯ.




ನಡವಳಿಕೆ
     ~~~~ 
ನಮ್ಮ ನಡವಳಿಕೆಗಳ ನಾವೆ ತಿದ್ದಲು ಬೇಕು  
ಸುಮ್ಮನಿರದನುದಿನವು ದುಡಿಯುತಿರ ಬೇಕು |  
ಹಮ್ಮುಬಿಮ್ಮನು ತೊರೆದ ಮಾನವತೆ ಇರಬೇಕು  
ನೆಮ್ಮದಿಯ ಜೀವನಕೆ - ಪುಟ್ಟಕಂದ || ೧ || 

ಹದವರಿತ ದುಡಿಮೆಯೇ ಮನುಜಗುಣವಾಗಿರಲು   
ಸದನದಲಿ ಬಲುಸುಖವು ನಿತ್ಯಜೀವನದಿ | 
ಮುದದಿಂದ ಮನೆಯೊಳಗೆ ಬಂದಿರುವ ಜನರನ್ನು 
ಸದರದಲಿ ಸತ್ಕರಿಸು - ಪುಟ್ಟಕಂದ || ೨ ||  

ಮನುಜರಿಗೆ ಸಹಜಗುಣ ಉಪಕಾರವೆಸಗುವುದು 
ದನುಜರೆಲ್ಲರ ಗುಣವು ಹಾನಿಯೆಸಗುವುದು |  
ಹಣೆಬರಹ ಬರೆಯುತಿಹ ಪರಬೊಮ್ಮ ಪರಮಾತ್ಮ--  
ಗೆಣೆಯಿಲ್ಲ ಲೋಕದಲಿ - ಪುಟ್ಟಕಂದ || ೩ ||   

ಮಾಡಿ ಮುಗಿಸುವುದೊಳಿತು ಕರ್ತವ್ಯಗಳನೆಲ್ಲ  
ಬೇಡುವುದು ತರವಲ್ಲ ನೆರೆಕರೆಯ ಜನರ |   
ಕಾಡುವುದು ಅಪರಾಧ ಬಂಧುಗಳ ಸಜ್ಜನರ    
ನೀಡುವುದು ಗುಣಧರ್ಮ - ಪುಟ್ಟಕಂದ || ೪ ||  

(ಛಂದೋಬದ್ಧ ಆಶು ಮುಕ್ತಕಗಳು) 
ವಿ.ಬಿ.ಕುಳಮರ್ವ, ಕುಂಬ್ಳೆ ✍️



Post a Comment

ನವೀನ ಹಳೆಯದು