ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮಕ್ಕಳ ಕವನ- ಶಿಕ್ಷಕನೆಂದರೆ......! ಎರಡು ಭಿನ್ನ ಧ್ವನಿಗಳಲ್ಲಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



                      

ಶಿಕ್ಷಕನೆಂದರೆ ಹೇಗಿರ ಬೇಕು 

ಮಕ್ಕಳ ಪ್ರೀತಿಯ ಗಳಿಸಿರ ಬೇಕು || 

                              ||ಪಲ್ಲವಿ||  

ನಿಷ್ಠೆಲಿ ಪಾಠವ ಮಾಡಲು ಬೇಕು 

ಕಷ್ಟವ ನೀಗಲು ಹರಸಲು ಬೇಕು| 

ಬದುಕಿಗೆ ದಾರಿಯ ತೋರಲು ಬೇಕು 

ಮಮತೆಲಿ ಶಿಷ್ಯರ ಸಲಹಲು ಬೇಕು || 


ಪಾಠದ ಜತೆಯಲಿ ಆಟವು ಬೇಕು 

ಜ್ಞಾನವ ಗಳಿಸಲು ವಿದ್ಯೆಯು ಬೇಕು | 

ವಿದ್ಯೆಯು ಬುದ್ಧಿಯು ಮನುಜಗೆ ಬೇಕು 

ಬೋಧಿಪ ಗುರುವಲಿ ಭಕ್ತಿಯು ಬೇಕು || 


ಕಲಿಸಲು ಗುರುವಿಗೆ ಸಿದ್ಧತೆ ಬೇಕು 

ಮಕ್ಕಳ ಮನವನು ಒಲಿಸಲು ಬೇಕು | 

ತಾಯಿಯ ಮಮತೆಯ ತೋರಲು ಬೇಕು 

ತಂದೆಯ ಪ್ರೀತಿಯ ನೀಡಲು ಬೇಕು ||


 


ಹಗಲೂ ರಾತ್ರಿಯು ಸಾಧಿಸ ಬೇಕು 

ಸಾಧನೆ ಹಾದಿಲಿ ಸಾಗಲು ಬೇಕು | 

ಕಲಿಸಿದ ಗುರುವಿಗೆ ನಮಿಸಲು ಬೇಕು 

ಮರೆಯದೆ ಗೌರವ ಸಲ್ಲಿಸ ಬೇಕು  ||  


ಗುರುವಿನ ಗುಲಾಮನಾಗಲು ಬೇಕು 

ಅರಿವನು ಹಂಚುತ ಬೆಳಗಲು ಬೇಕು |  

ನೀತಿಯ ನಿಯಮವನರಿಯಲು ಬೇಕು  

ಶಾಲೆಯು ದೇಗುಲ ತಿಳಿದಿರ ಬೇಕು ||  


ಉಜ್ವಲ ಭವಿಷ್ಯ ನಮಗಿರ ಬೇಕು  

ಆಗಸದೆತ್ತರಕೇರಲು ಬೇಕು |  

ದೇಶವ ಕಟ್ಟುವ ಛಲವಿರ ಬೇಕು  

ಗುರುವಿನ ಪಾದಕೆ ಮಣಿಯಲು ಬೇಕು || 


  


ಶಿಕ್ಷಕನೆಂದರೆ ಆತ ಶಿಕ್ಷಕನೂ ಹೌದು, ವಿದ್ಯಾರ್ಥಿಯೂ ಹೌದು.ಆದರೆ ವಿದ್ಯಾರ್ಥಿಯೆಂದರೆ ವಿದ್ಯಾರ್ಥಿ ಮಾತ್ರ. ಭವಿಷ್ಯದ ಸಮರ್ಥ ಪ್ರಜೆಗಳನ್ನು ರೂಪಿಸುವ ಸಕಲ ಶಿಕ್ಷಕ ಬಂಧುಗಳಿಗೂ ಶಿಕ್ಷಕರ ದಿನದ ಶುಭಾಶಯಗಳು.

 

-ವಿ.ಬಿ.ಕುಳಮರ್ವ, ಕುಂಬ್ಳೆ


ಹಾಡಿದವರು

1. ಅವನಿಶ್ರೀ ಕುಳಮರ್ವ

2. ಕಲಾಶ್ರೀ ವಿದ್ಯಾಶಂಕರ್ ಮಂಡ್ಯ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

أحدث أقدم