ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಸಾಧನಕೇರಿಯ ಸಾಧಕರು (ಬೇಂದ್ರೆ ನಮನ) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಸಾಧನಕೇರಿಯ ಸಾಧಕರು  

ಬೋಧನೆ ಗೈದರು ಭಾವಗಳ |  

ಮಾಧುರ್ಯ ಕಂಠದಿ ಹಾಡಿದರು  

ಕ್ರೋಧವ ಗೆಲಿದಿಹ ತವಸಿಗಳು ||  

                                   || ೧ || 

ಬರೆದರು ಬಗೆಮಿಗೆ ಗೀತೆಗಳ  

ಒರೆಯುತ ಮಮತೆಯ ಮಾತುಗಳ|  

ಕರೆದರು ಗಂಗೆಯನಾಗಸದಿ  

ಹರಿದರು ಮೌಢ್ಯದ ತತ್ತ್ವಗಳ ||  

                                   || ೨ || 


  


ಅಂಬಿಕೆ ತನಯರು ಕನ್ನಡದತ್ತ  

ನಂಬಿಕೆ ಹೆಜ್ಜೆಯ ಹಾಕಿದರು | 

ಅಂಬಿಗರವರು ಗೀತೆಯ ನಾವೆಗೆ  

ತುಂಬಿದ ಕೊಡದೊಲು ಪಂಡಿತರು ||  

                                    || ೩ ||  

ಏರುತ ಮೇಲಕೆ ಏಣಿಯನು  

ಬರೆಯುತಲಿತ್ತರು ಕಾವ್ಯವನು | 

ಸುರನರಲೋಕದಿ ಕೀರ್ತಿಯನು  

ವರಕವಿ ಗೆಲಿದರು ಹೃದಯವನು ||   

                                    || ೪ ||  

ಕಾವ್ಯದ ಸುಮಲತೆ ಪರಿಮಳವು  

ಸೇವ್ಯಕೆ ಯೋಗ್ಯದ ಬರಹಗಳು|  

ಭವ್ಯದ ಬದುಕಿಗೆ ಶ್ರೀಕಾರ  

ನವ್ಯದ ಕಾಲಕು ಸಿರಿಹರಳು ||  

                                    || ೫ ||  

ಮಾನವ ಧರ್ಮವ ಸಾರಿದರು  

ದಾನವ ವೈರಿಯ ನುತಿಸಿದರು |  

ಜ್ಞಾನದ ಪೀಠವನೇರಿದರು  

ಮೇನೆಯ ಮನ್ನಣೆ ಗಳಿಸಿದರು ||  

                                   || ೬ ||  

[ಆದಿಪ್ರಾಸ ಮತ್ತು ಅಂತ್ಯಪ್ರಾಸವುಳ್ಳ ಕಿರಿಯರ ಕವನ] 

ರಚನೆ 

ವಿ.ಬಿ.ಕುಳಮರ್ವ,ಕುಂಬ್ಳೆ

(ಈ ಆಶುಕವನ ವರಕವಿ ಅಂಬಿಕಾತನಯದತ್ತರ ಜನ್ಮದಿನದ ಸವಿನೆನಪಿಗಾಗಿ)

ಹಾಡಿದವರು:-ಶ್ರೀಮತಿ ಮಾಲತಿ ಕಾಕುಂಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು