ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಉದಯಗೀತೆ ಬದುಕಗೀತೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಬಾನೊಡೆಯ ಮೂಡುತಿರಲು

ಬೆಳಕಾಗಿ ಹರಡುತಿರಲು

ಆಹಾ ಭುವಿಯಲ್ಲಿ ಅದೇನು ರಮ್ಯವೊ


ಉದಯಗೀತೆ ಹಾಡುತಿರಲು

ಬದುಕಗೀತೆ ಹೊಳೆಯುತಿರಲು

ಆಹಾ ಭುವಿಯಲ್ಲಿ ಅದೇನು ಭವ್ಯವೊ


ರವಿಮೂಡಿ ಬೆಳಕಾಗಿ

ಉದಯಗೀತೆ ಬಾಳಗೀತೆ ಆಗಲು

ಆಹಾ ನೇಸರಲಿ ಅದೇನು ದಿವ್ಯವೊ 


ಮುಂಜಾನೆ ಮಂಜಿನ ಹನಿ

ಇಬ್ಬನಿಯ ಮುತ್ತಾಗಿ ಹೊಳೆಯಲು

ಆಹಾ ನೋಡಲೆಂತ ಸೊಗಸೊ 


ಇಂಪಾಗಿ ತಂಗಾಳಿ ಬೀಸಲು 

ಹೂವರಳಿ ಪರಿಮಳ ಸೂಸಲು

ಆಹಾ ತನವಲೆಂತ ಆನಂದವೊ 


ಬೆಳಗಿನಲಿ ಹಕ್ಕಿಗಳು ಹಾಡಲು 

ಚಿಲಿಪಿಲಿ ಭಾವಗೀತೆ ಕೇಳಲು

ಆಹಾ ಮನದಲೆಂತ ಹರ್ಷವೊ



ರಚನೆ: ಬಂದ್ರಳ್ಳಿ ಚಂದ್ರು

ಗಾಯನ: ಶ್ರೀಮತಿ ವಿದ್ಯಾ ಪಿ. ಭಟ್

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು