ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮುಕ್ತಕಗಳು: ಧರ್ಮಫಲ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 


1. ಅತಿಶಯದ ಫಲ ದೊರಕುವುದು ಧರ್ಮಪಾಲಕಗೆ 

ಇತಿಹಾಸವೋದಿದರೆ ತಿಳಿಯುವುದು ನಮಗೆ | 

ಮಿತಿಯಿರದ ಪುಣ್ಯಫಲ ವಶವಾಗೆ ಸಾಯುಜ್ಯ  

ಅತಿಸುಖವ ಬಯಸದಿರು - ಪುಟ್ಟಕಂದ || 


2. ಫಲಗಳನು ಬಯಸದೆಯೆ ಕಾಯಕವನೆಸಗಿದರೆ   

ನೆಲವು ಹಸನಾಗಿ ಹೊಸಫಲವು ದೊರಕುವುದು | 

ಕುಳಿತುಂಬವನಿಗೆ ಕುಡಿಕೆಹಣ ಸಾಲದೆನುವುದು

ಹಳೆಗಾದೆ ಮರೆಯದಿರು - ಪುಟ್ಟಕಂದ ||  


3. ಭಗವಂತನೊರೆದಿರುವ ಕರ್ಮಭೂಮಿಯ ಮಹತಿ  

ಖಗಮೃಗೋರಗಗಳಿಗು ತಿಳಿಯುವುದು ಸಹಜ |  

ನೊಗಧರನ ಒಡವುಟ್ಟಿ ಬಂದಿರುವ ನಗಧರನೆ  

ಖಗವಾಹನನು ತಿಳಿಯೊ - ಪುಟ್ಟಕಂದ || 

(ಇಂದಿನ ಛಂದೋಬದ್ಧ ಮುಕ್ತಕ ತ್ರಯ) 

-ವಿ.ಬಿ.ಕುಳಮರ್ವ, ಕುಂಬ್ಳೆ 

ಸಂಗೀತ ಸಂಯೋಜನೆ-ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ



ಗಾಯನ: ಶ್ರೀ ಬಾಲಕೃಷ್ಣ ಆಚಾರ್ಯ ಪುತ್ತಿಗೆ

Post a Comment

أحدث أقدم